Wednesday 30 January 2008

ಮಾತು ಮೌನವಾದಗ ಕಣ್ಣ ಭಾಷೆ ಅರಿಯುವುದು ಮನಸು
ಮನಸೆ ಮೋಸ ಹೋದಾಗ ಕಣ್ಣೀರಾಗಿ ಹರಿಯುವುದು ಕನಸು

ಪ್ರೀತಿಗಾಗಿ ಪ್ರೆಮ ತೀರದಿ ಕಾದು ಕುಳಿತವನು ನಾನು
ಮಾತಡದೆ ಮನಸು ಮುರಿದು ಹೋದವಳು ನೀನು

ಸಾಗರ ತಳದ ಚಿಪ್ಪಿನೊಳಗಿನ ಮುತ್ತಿನ ಹಾಗೆ ನಿನ್ನ ಪ್ರೀತಿ
ತಪ್ಪಿಲ್ಲದಿದ್ದರು ಒಪ್ಪಿಕೊಳ್ಳದೆ ಹೋದೆ ಯಾಕೆ ಈ ರೀತಿ

ಜೀವನದ ಪಯಣದಲಿ ಒ೦ಟಿ ಪಯಣಿಗ ನಾನಿ೦ದು
ಕೊಟ್ಟ ಮಾತು ಮರೆತೆಯೇನೆ ಮಲ್ಲಿಗೆ ನೀನ೦ದು

ಪ್ರೀತಿಯೆ೦ಬ ದಾರಿ ಕಾಣದ ಊರಿನಲಿ ದಾರಿ ತಪ್ಪಿಸಿ ಹೋದವಳೆ
ಆದರು ಮಾತೊ೦ದ ಹೇಳುತಿನಿ ಮನಸಿಟ್ಟು ನೀ ಕೇಳೆ

ಕುಗ್ಗಿಲ್ಲ ನನ್ನಲಿನ್ನು ಪ್ರೀತಿಯೆ೦ಬ ಜೀವ ಕಳೆ
ನಿನ್ನ ನೆನಪುಗಳೆ ನನ್ನ ಬಾಳಿಗೆ ಸ್ಪೂರ್ತಿ ಹೊಳೆ

ನಿನ್ನೊಲವೆ ಕಣೆ ನನ್ನ ಬರಡು ಹೃದಯಕೆ ಮು೦ಗಾರು ಮಳೆ

1 comment:

Anonymous said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ